Monday, December 29, 2014

ROAD ACCIDENTS



ರಸ್ತೆ ಅಪಘಾತಗಳಿಂದ ಮರಣ ಬೆಂಗಳೂರಿಗೆ ತೃತೀಯ ಸ್ಥಾನ
ನಮ್ಮ ದೇಶದಲ್ಲಿ ಪ್ರತಿನಿತ್ಯ ಸಂಭವಿಸುತ್ತಿರುವ ಅಸಂಖ್ಯ ರಸ್ತೆ ಅಪಘಾತಗಳಲ್ಲಿ ಲಕ್ಷಾಂತರ ಜನರು ಮೃತಪಡುತ್ತಾರೆಅತಿ ಹೆಚ್ಚು ಜನರು ಬಲಿಯಾಗುತ್ತಿರುವ ನಗರಗಳ ಪಟ್ಟಿಯಲ್ಲಿ  ಬೆಂಗಳೂರು ಮಹಾನಗರವು ತೃತೀಯ ಸ್ಥಾನದಲ್ಲಿದೆಆದರೆ ಅತ್ಯಧಿಕ ರಸ್ತೆ ಅಪಘಾತಗಳು ಸಂಭವಿಸುವ ನಗರಗಳ ಯಾದಿಯಲ್ಲಿ ಬೆಂಗಳೂರು ನಾಲ್ಕನೆಯ ಸ್ಥಾನದಲ್ಲಿದೆ.

ರಸ್ತೆ ಅಪಘಾತಗಳನ್ನು ಸಂಪೂರ್ಣವಾಗಿ ತಡೆಗಟ್ಟುವುದು ಅಸಾಧ್ಯವೆನಿಸಿದರೂ, ಇವುಗಳ ಸಂಖ್ಯೆ ಮತ್ತು ಮರಣಗಳ ಪ್ರಮಾಣವನ್ನು ಕಡಿಮೆಮಾಡುವುದು ಅಸಾಧ್ಯವೇನಲ್ಲಆದರೆ ಇದಕ್ಕೆ ಬೇಕಾಗುವ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಗಂಭೀರ ಸಮಸ್ಯೆಯನ್ನು ನಿಯಂತ್ರಿಸಲು ನಾವಿಂದು ವಿಫಲರಾಗಿರುವುದು ಮಾತ್ರ ಸುಳ್ಳೇನಲ್ಲ.

ವಿಶ್ವದ  ರಸ್ತೆ ಅಪಘಾತಗಳ ರಾಜಧಾನಿ

ಭಾರತವು ವಿಶ್ವದ ರಸ್ತೆ ಅಪಘಾತಗಳ ರಾಜಧಾನಿಯೆಂದೇ ಕುಪ್ರಸಿದ್ಧವಾಗಿದೆ. ಏಕೆಂದರೆ ನಮ್ಮ ದೇಶದಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೆ ಒಬ್ಬರಂತೆಒಂದುದಿನದಲ್ಲಿ ಸುಮಾರು ೩೮೦ ಜನರು ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆನೇಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ವರದಿಯಲ್ಲಿ ಈ ವಿಚಾರವನ್ನು ಉಲ್ಲೇಖಿಸಲಾಗಿದ್ದು೨೦೦೧ ರಿಂದ ೨೦೧೦ ರ ಅವಧಿಯಲ್ಲಿ ೧೦ ಲಕ್ಷಕ್ಕೂ ಅಧಿಕ ಭಾರತೀಯರು ರಸ್ತೆ ಅಪಘಾತಗಳಿಂದ ಮೃತಪಟ್ಟಿದ್ದಾರೆತತ್ಪರಿಣಾಮವಾಗಿ ದೇಶಕ್ಕೆ ಸುಮಾರು ನೂರಾರು  ಕೋಟಿ ರೂ.ಗಳಷ್ಟು ನಷ್ಟವೂ ಸಂಭವಿಸಿದೆ.

೨೦೧೨ ನೇ ಇಸವಿಯ ಅಂಕಿ ಅಂಶಗಳೊಂದಿಗೆ ತುಲನೆಮಾಡಿದಾಗ ೨೦೧೪ ರಲ್ಲಿ ಕರ್ನಾಟಕದಲ್ಲಿ ಸಂಭವಿಸಿದ್ದ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿದ್ದರೂಇವುಗಳಿಗೆ ಬಲಿಯಾದವರ ಸಂಖ್ಯೆ ಮಾತ್ರ ಹೆಚ್ಚಿತ್ತುಅಂತೆಯೇ ಅತ್ಯಧಿಕ ಜನರು ಬಲಿಯಾಗಿದ್ದ ನಗರಗಳ ಯಾದಿಯಲ್ಲಿಬೆಂಗಳೂರು ಮಹಾನಗರವು ಮೂರನೆಯ ಸ್ಥಾನದಲ್ಲಿತ್ತು೨೦೧೩ ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ್ದ ೫೨೧೫ ರಸ್ತೆ ಅಪಘಾತಗಳಲ್ಲಿ ೭೫೨ ಜನರು ಬಲಿಯಾಗಿದ್ದರು.

ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ೨೦೧೩ ರ ವರದಿಯಂತೆ ಕರ್ನಾಟಕ ರಾಜ್ಯವು ಭಾರತದಲ್ಲೇ ಅತ್ಯಧಿಕ ರಸ್ತೆ ಅಪಘಾತಗಳು ಸಂಭವಿಸುವ ರಾಜ್ಯಗಳ ಪಟ್ಟಿಯಲ್ಲಿ ನಾಲ್ಕನೆಯ ಸ್ಥಾನದಲ್ಲಿದೆ. ಗತವರ್ಷದಲ್ಲಿ ಕರ್ನಾಟಕದಲ್ಲಿ ೪೪,೦೨೦ ರಸ್ತೆ ಅಪಘಾತಗಳು ಸಂಭವಿಸಿದ್ದು೨೦೧೨ ರಲ್ಲಿ ಸಂಭವಿಸಿದ್ದ ೪೪,೪೪೮ ಅಪಘಾತಗಳಿಗಿಂತಲೂ ಕಡಿಮೆಯಾಗಿದೆಆದರೆ ಇದೇ  ಅವಧಿಯಲ್ಲಿ ಅಪಘಾತಗಳಿಗೆ ಬಲಿಯಾಗಿದ್ದವರ ಸಂಖ್ಯೆಯು ೯೯೪೮ ಆಗಿದ್ದು೨೦೧೩ ರಲ್ಲಿ ಈ ಸಂಖ್ಯೆಯು ೧೦,೦೪೬ ಕ್ಕೆ ತಲುಪಿತ್ತು!.

ಇದೇ ವರದಿಯಲ್ಲಿ ನಮೂದಿಸಿರುವಂತೆ ೨೦೧೨ ನೆ ಇಸವಿಯಲ್ಲಿ ಭಾರತದಲ್ಲಿ ೪.೯೦ ಲಕ್ಷ ರಸ್ತೆ ಅಪಘಾತಗಳು ಸಂಭವಿಸಿದ್ದು.೩೭ ಲಕ್ಷ ಜನರು ಇದರಲ್ಲಿ ಅಸುನೀಗಿದ್ದರುಆದರೆ ೨೦೧೩ ರಲ್ಲಿ ಅಪಘಾತಗಳ ಸಂಖ್ಯೆ ೪.೮೬ಲಕ್ಷಕ್ಕೆ ಇಳಿದಿದ್ದರೂ.೩೮ ಲಕ್ಷ ಜನರು ಇವುಗಳಿಗೆ ಬಲಿಯಾಗಿದ್ದರು.

ನಮ್ಮ ದೇಶದಲ್ಲೇ ಅತ್ಯಧಿಕ ರಸ್ತೆ ಅಪಘಾತಗಳು ನಮ್ಮ ನೆರೆಯ ತಮಿಳುನಾಡಿನಲ್ಲಿ ಸಂಭವಿಸುತ್ತವೆ. ೨೦೧೩ ರಲ್ಲಿ ತಮಿಳುನಾಡಿನಲ್ಲಿ ೬೬,೨೩೮ ರಸ್ತೆ ಅಪಘಾತಗಳು ಸಂಭವಿಸಿದ್ದಲ್ಲಿಮಹಾರಾಷ್ಟ್ರದಲ್ಲಿ ೬೩,೦೧೯ಮಧ್ಯಪ್ರದೇಶದಲ್ಲಿ ೫೧,೮೧೦ಕರ್ನಾಟಕದಲ್ಲಿ ೪೪,೦೨೦ ಮತ್ತು ಆಂಧ್ರಪ್ರದೇಶದಲ್ಲಿ ೪೩,೪೮೨ ರಸ್ತೆ ಅಪಘಾತಗಳು ಸಂಭವಿಸಿದ್ದವುವಿಶೇಷವೆಂದರೆ ದೇಶದಲ್ಲೇ ಅತ್ಯಧಿಕ ಜನರನ್ನು ಬಲಿತೆಗೆದುಕೊಂಡಿರುವ ರಸ್ತೆ ಅಪಘಾತಗಳಲ್ಲಿ ದೇಶದ ರಾಜಧಾನಿಯಾಗಿರುವ ದೆಹಲಿಯು ಅಗ್ರಸ್ಥಾನದಲ್ಲಿದೆದೆಹಲಿಯಲ್ಲಿ ಸಂಭವಿಸಿದ್ದ ೭೫೫೬ ರಸ್ತೆ ಅಪಘಾತಗಳಲ್ಲಿ ೧೮೨೦ ಜನರು ಬಲಿಯಾಗಿದ್ದಲ್ಲಿಚೆನ್ನೈ ನಗರದಲ್ಲಿ ಸಂಭವಿಸಿದ್ದ ೯೭೦೫ ಅಪಘಾತಗಳಲ್ಲಿ ೧೨೪೭ ಜನರು ಮೃತಪಟ್ಟಿದ್ದರುಬೆಂಗಳೂರು ನಗರವು ತದನಂತರದ ಸ್ಥಾನದಲ್ಲಿದೆ.
ದ್ವಿಚಕ್ರ ವಾಹನಗಳು, ಕಾರುಗಳು ಮತ್ತು ಟ್ಯಾಕ್ಸಿಗಳು ಶೇ.೪೫ ರಷ್ಟು ಮರಣಗಳಿಗೆ ಕಾರಣವೆನಿಸಿದ್ದು, ಮೃತಪಟ್ಟವರಲ್ಲಿ ಅತ್ಯಧಿಕ ಜನರು ೩೦ ರಿಂದ ೪೪ ವರ್ಷ ವಯಸ್ಸಿನವರೇ ಆಗಿದ್ದಾರೆ. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋದ ವರದಿಯಂತೆ, ನಮ್ಮ ದೇಶದಲ್ಲಿ ೧೪ ವರ್ಷಕ್ಕಿಂತ ಕೆಳಗಿನ ೨೦ ಮಕ್ಕಳು ಪ್ರತಿನಿತ್ಯ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿದ್ದಾರೆ.

ಜಾಗತಿಕ ಸಮಸ್ಯೆ

ರಸ್ತೆ ಅಪಘಾತಗಳಿಂದ  ಸಂಭವಿಸುತ್ತಿರುವ ಪ್ರಾಣಹಾನಿಯು ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ. ಯುನೈಟೆಡ್ ನೇಷನ್ಸ್ ಸಂಸ್ಥೆಯು ಹಮ್ಮಿಕೊಂಡಿದ್ದ " ರಸ್ತೆ ಸುರಕ್ಷಾ ದಶಕ " ( ೨೦೧೦- ೨೦೨೦ ) ಕಾರ್ಯಕ್ರಮದಲ್ಲಿ, ಈ ಗಂಭೀರ ಸಮಸ್ಯೆಯನ್ನು ಖಚಿತವಾಗಿ ನಿಯಂತ್ರಿಸಲು ನಿರ್ದಿಷ್ಟ ಗುರಿಯನ್ನು ನಿಗದಿಸಲಾಗಿತ್ತು. ಇದನ್ನು ಸಾಧಿಸಲು ಸೂಕ್ತ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ, ಸದಸ್ಯ ರಾಷ್ಟ್ರಗಳು ರಸ್ತೆ ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ವೃದ್ಧಿಸಲು, ಸುರಕ್ಷಿತ ರಸ್ತೆಗಳನ್ನು ನಿರ್ಮಿಸಲು ಹಾಗೂ ಸುಗಮ ಸಂಚಾರಕ್ಕೆ ಅವಶ್ಯಕ ಸೌಲಭ್ಯಗಳನ್ನು ಒದಗಿಸಲುಸುರಕ್ಷಿತ ವಾಹನಗಳ ನಿರ್ಮಾಣಕ್ಕೆ ಆದ್ಯತೆಯನ್ನು ನೀಡಲು ಮತ್ತು ಅಪಘಾತಗಳು ಸಂಭವಿಸಿದೊಡನೆ ಕೈಗೊಳ್ಳಬೇಕಾದ ತುರ್ತುಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಿತ್ತು. ಜೊತೆಗೆ ಅಮೇರಿಕಾದಲ್ಲಿ ೨೦೧೨ ರಲ್ಲಿ ಜರಗಿದ್ದ ಯುನೈಟೆಡ್ ನೇಷನ್ಸ್ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ರಸ್ತೆ ಸುರಕ್ಷಾ ದಶಕದ ಅವಧಿಯಲ್ಲಿ ೫ ದಶಲಕ್ಷ ಜನರ ಪ್ರಾಣಗಳನ್ನು ಉಳಿಸಲು ಮತ್ತು ೫೦ ಲಕ್ಷ ಜನರನ್ನು ಗಂಭೀರ ಗಾಯಗಳಿಂದ ರಕ್ಷಿಸಲು ಸಮರೋಪಾದಿಯಲ್ಲಿ ಕಾರ್ಯೋನ್ಮುಖರಾಗಬೇಕೆಂದು ಕರೆನೀಡಲಾಗಿತ್ತು.

ಭಾರತದಲ್ಲಿ ಹೆಚ್ಚುತ್ತಿರುವ ಅಪಘಾತಗಳು

ನಮ್ಮ ದೇಶದಲ್ಲಿ ರಸ್ತೆ ಅಪಘಾತಗಳು  ಸಾರ್ವಜನಿಕರ ಆರೋಗ್ಯಕ್ಕೆ ಸಂಬಂಧಿಸಿದಂತೆ ತುರ್ತುಪರಿಸ್ಥಿತಿಗಳಿಗೆ  ಕಾರಣವೆನಿಸುತ್ತಿರಲುನೂತನವಾಗಿ ನಿರ್ಮಿಸಲ್ಪಡುತ್ತಿರುವ  ಅತ್ಯಾಧುನಿಕ ಸುಸಜ್ಜಿತ ರಸ್ತೆಗಳು ಹಾಗೂ ಪುನರ್ ನವೀಕರನಗೊಳ್ಳುತ್ತಿರುವ ಅನ್ಯ ರಸ್ತೆಗಳೊಂದಿಗೆ, ಅನಿಯಂತ್ರಿತವಾಗಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಗಳೂ ಕಾರಣವೆನಿಸುತ್ತಿವೆ. ಕಳೆದ ಮೂರು ದಶಕಗಳಲ್ಲಿ ಭಾರತದಲ್ಲಿರುವ ರಸ್ತೆಗಳ ಪ್ರಮಾಣವು ಮೂರು ಪಟ್ಟು ಹೆಚ್ಚಿದೆ. ಇದರೊಂದಿಗೆ ರಸ್ತೆ ಅಪಘಾತಗಳ ಪ್ರಮಾಣವು ಶೇ..೪ ರಷ್ಟು ಹೆಚ್ಚಿದೆ.  ಅಂತೆಯೇ ಇವುಗಳಿಗೆ ಬಲಿಯಾಗುವವರ ಸಂಖ್ಯೆಯು ಶೇ..೩ ರಷ್ಟು ಹೆಚ್ಚಿದೆ.

ಸರ್ಕಾರದ ವೈಫಲ್ಯ

ನಮ್ಮ ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರ ಪ್ರಾಣರಕ್ಷಣೆಗೆ- ಚಿಕಿತ್ಸೆಗಳಿಗೆ ಅತ್ಯವಶ್ಯಕವೆನಿಸುವ ಅಂಬುಲೆನ್ಸ್, ತುರ್ತು ಸಹಾಯ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ವಿಶೇಷ ಚಿಕಿತ್ಸೆಯನ್ನು ನೀಡಬಲ್ಲ ಸುಸಜ್ಜಿತ ಆಸ್ಪತ್ರೆಗಳೇ ಮುಂತಾದ ಸೌಲಭ್ಯಗಳು ಮಾತ್ರ ಅಪೇಕ್ಷಿತ ಮಟ್ಟದಲ್ಲಿ ವೃದ್ಧಿಸಿಲ್ಲ. ಸೊಸೈಟಿ ಫಾರ್ ಎಮರ್ಜೆನ್ಸಿ ಮೆಡಿಸಿನ್ ಸಂಸ್ಥೆಯ ಅಭಿಪ್ರಾಯದಂತೆ, ಗಂಭೀರವಾಗಿ ಗಾಯಗೊಂಡವರಿಗೆ ತುರ್ತುಚಿಕಿತ್ಸೆ ನೀಡಬಲ್ಲ ಟ್ರೋಮಾ ಸೆಂಟರ್ ಗಳಂತಹ ವ್ಯವಸ್ಥೆಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಯೋಜನೆಗಳನ್ನು ಹಮ್ಮಿಕೊಂಡಿದ್ದರೂ, ಇವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಹಾಗೂ ಇದೇ ರೀತಿಯ ಅನ್ಯ ಕಾರಣಗಳಿಂದಾಗಿ ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆಯನ್ನು ನಿಯಂತ್ರಿಸಲು ಆಗುತ್ತಿಲ್ಲ. ಇವೆಲ್ಲವನ್ನೂ ಮಾಡಬೇಕಾಗಿರುವ ಸರ್ಕಾರವೇ ಕೈಕಟ್ಟಿ ಕುಳಿತಲ್ಲಿ ಇಂತಹ ಗಂಭೀರ ಸಮಸ್ಯೆಗೆ ಪರಿಹಾರ ದೊರೆಯುವ ಸಾಧ್ಯತೆಗಳೇ ಇಲ್ಲ.

ನೀವೇನು ಮಾಡಬಹುದು

ವಾಹನಗಳನ್ನು ಚಲಾಯಿಸುವಾಗ ಅಥವಾ ರಸ್ತೆ- ಕಾಲುದಾರಿಗಳಲ್ಲಿ ನಡೆಯುವಾಗ ಮತ್ತು ರಸ್ತೆಗಳನ್ನು ದಾಟುವಾಗರಸ್ತೆ ಸುರಕ್ಷತಾ ನಿಯಮಗಳನ್ನು ತಪ್ಪದೆ ಪರಿಪಾಲಿಸಿ. ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸುವುದರಿಂದ ಅನುಕ್ರಮವಾಗಿ ಶೇ. ೪೦ ರಷ್ಟು ಮತ್ತು ಶೇ.೫೦ ರಷ್ಟು ಗಂಭೀರ ಗಾಯಗಳನ್ನು ತಡೆಗಟ್ಟಬಹುದು ಎನ್ನುವುದನ್ನು ಮರೆಯದಿರಿ. ಮಾದಕ ವಸ್ತುಗಳನ್ನು ಸೇವಿಸಿ ಅಥವಾ ಮೊಬೈಲ್ ದೂರವಾಣಿಯಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವುದು ಅಪಾಯಕ್ಕೆ ಆಹ್ವಾನವನ್ನು ನೀಡಿದಂತೆ ಎನ್ನುವುದು ನೆನಪಿರಲಿ. ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಅತಿವೇಗದಲ್ಲಿ ವಾಹನಗಳನ್ನು ಚಲಾಯಿಸುವುದು ನಿಮ್ಮ ಪ್ರಾಣಕ್ಕೆ ಮಾತ್ರವಲ್ಲ, ರಸ್ತೆಯನ್ನು ಬಳಸುವ ಇತರರ ಪ್ರಾಣಕ್ಕೂ ಎರವಾಗಬಲ್ಲದು ಎನ್ನುವುದನ್ನು ಮರೆಯದಿರಿ. ಅಂತಿಮವಾಗಿ " ನಿಧಾನವೇ ಪ್ರಧಾನ " ಎನ್ನುವುದು ನಿಮ್ಮ ಧ್ಯೇಯಗಳಲ್ಲಿ ಪ್ರಮುಖವಾಗಿರಲಿ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 






No comments:

Post a Comment