Sunday, January 11, 2015

BSNL 3 G - No Jee !


ಪುತ್ತೂರು: ಬಿ ಎಸ್ ಎನ್ ಎಲ್ ಜಿ - ನೋ ಜೀ  !
ನಮ್ಮ ದೇಶವು ದೂರಸಂಪರ್ಕ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಅಂತೆಯೇ ಅಂತರ್ಜಾಲ ಬಳಕೆಯ ಮೂಲಕ ಇ- ಆಡಳಿತ ಮತ್ತಿತರ ಕ್ರಾಂತಿಕಾರಿ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ಇದೀಗ ದೇಶದ ೨.೫ ಲಕ್ಷ ಗ್ರಾಮ ಪಂಚಾಯತಿಗಳಿಗೆ ಒಪ್ಟಿಕಲ್ ಫೈಬರ್ ಮೂಲಕ ಬ್ರಾಡ್ ಬ್ಯಾಂಡ್ ಸಂಪರ್ಕಜಾಲವನ್ನು( ಭಾರತ್ ಬ್ರಾಡ್ ಬ್ಯಾಂಡ್ ನೆಟ್ ವರ್ಕ್ ) ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯೂ ಕೇರಳದಲ್ಲಿ ಉದ್ಘಾಟನೆಗೊಂಡಿದೆ. ಆದರೆ ದೇಶದ ಅನೇಕ ನಗರ- ಪಟ್ಟಣಗಳಲ್ಲಿ ಸರಕಾರೀ ಸ್ವಾಮ್ಯದ ಬಿ ಎಸ್ ಎನ್ ಎಲ್ ಸಂಸ್ಥೆಯು ಒದಗಿಸುತ್ತಿರುವ ಅಂತರ್ಜಾಲ ಸೇವೆಯು, ಅಪೇಕ್ಷಿತ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ.
ಬಿ ಎಸ್ ಎನ್ ಎಲ್ ಏಕಾಧಿಪತ್ಯ
ಸುಮಾರು ನಾಲ್ಕು ದಶಕಗಳ ಹಿಂದಿನ ತನಕ ನಿಮಗೊಂದು ಸ್ಥಿರ ದೂರವಾಣಿ ಸಂಪರ್ಕ ಸಿಗಬೇಕಿದ್ದಲ್ಲಿ, ಬಿ ಎಸ್ ಎನ್ ಎಲ್ ಕಚೇರಿಗೆ ಅರ್ಜಿಯನ್ನು ಗುಜರಾಯಿಸಿ ವರ್ಷಗಟ್ಟಲೆ ಕಾಯಬೇಕಾಗುತ್ತಿತ್ತುಸರಕಾರೀ ಸ್ವಾಮ್ಯದ ಈ ಸಂಸ್ಥೆಯು ಅಂದಿನ ದಿನಗಳಲ್ಲಿ ಉತ್ತುಂಗದಲ್ಲಿತ್ತುಕಾಲಕ್ರಮೇಣ ಖಾಸಗಿ ಮೊಬೈಲ್ ದೂರವಾಣಿ ಸಂಸ್ಥೆಗಳು ಮಾರುಕಟ್ಟೆಗೆ ಲಗ್ಗೆಯಿಟ್ಟ ಬಳಿಕಇವುಗಳಿಂದ ಮಾಡುವ ಕರೆಗಳ ಶುಲ್ಕವೂ ಕಡಿಮೆಯಾಗಿತ್ತುತತ್ಪರಿಣಾಮವಾಗಿ ಮೊಬೈಲ್ ದೂರವಾಣಿಗಳ ಸಂಖ್ಯೆ ಹೆಚ್ಚುವುದರೊಂದಿಗೆಬಿ ಎಸ್ ಎನ್ ಎಲ್ ನ ಏಕಾಧಿಪತ್ಯವೂ ಅಂತ್ಯಗೊಂಡಿತ್ತು!.
ಖಾಸಗಿ ಮೊಬೈಲ್ ಸಂಸ್ಥೆಗಳ ಜನಪ್ರಿಯತೆಯನ್ನು ಗಮನಿಸಿದ ಬಿ ಎಸ್ ಎನ್ ಎಲ್ ಸಂಸ್ಥೆಯು ಮೊಬೈಲ್ ಸೇವೆಯನ್ನು ಒದಗಿಸುವ ಮತ್ತು ವಿಸ್ತರಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿತು. ಆದರೆ ತನ್ನ ಸಂಪರ್ಕಜಾಲವನ್ನು ವಿಸ್ತರಿಸುತ್ತಾ ಹೋಗಿದ್ದ ಸಂಸ್ಥೆಯುತನ್ನ ಸಾಮರ್ಥ್ಯಕ್ಕಿಂತ ಅಧಿಕ ಸಂಪರ್ಕಗಳನ್ನು ನೀಡಿದ್ದ ಕಾರಣದಿಂದಾಗಿ, ಉದ್ಭವಿಸಿದ್ದ ಸೇವಾ ಪರಿಣಾಮವಾಗಿ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿತ್ತು.
ಕೆಲವೇ ವರ್ಷಗಳಲ್ಲಿ ನಿಸ್ತಂತು ಅಂತರ್ಜಾಲ ಸೇವೆಯನ್ನು ಆರಂಭಿಸಿದ್ದ ಖಾಸಗಿ ಮೊಬೈಲ್ ಸೇವಾ ಸಂಸ್ಥೆಗಳು ದುಬಾರಿ ಶುಲ್ಕವನ್ನು ವಿಧಿಸುತ್ತಿದ್ದರೂಗ್ರಾಹಕರ ಬೆಂಬಲವನ್ನು ಗಳಿಸಲು ಯಶಸ್ವಿಯಾಗಿದ್ದವುತದನಂತರ ಜಿ ಹಾಗೂ ಜಿ ಸೇವೆಗಳನ್ನು ಒದಗಿಸಲಾರಂಭಿಸಿದ್ದ ಖಾಸಗಿ ಸೇವಾ ಸಂಸ್ಥೆಗಳನ್ನು ಅನುಕರಿಸಿದ್ದ ಬಿ ಎಸ್ ಎನ್ ಎಲ್ತನ್ನ ಸಂಪರ್ಕಜಾಲ ಮತ್ತು ಗ್ರಾಹಕ ಸ್ನೇಹಿ ದರಗಳಿಂದಾಗಿ ಕೊಂಚ ಜನಪ್ರಿಯತೆಯನ್ನು ಗಳಿಸಲು ಯಶಸ್ವಿಯಾಗಿತ್ತು.
ಪುತ್ತೂರಿನಲ್ಲಿ ಥ್ರೀ ಜಿ  ಸೇವೆ
ಬಿ ಎಸ್ ಎನ್ ಎಲ್ ಸಂಸ್ಥೆಯು ೨೦೧೩ ರ ಆಗಸ್ಟ್ ೨೨ ರಂದು ಪುತ್ತೂರು ನಗರದಲ್ಲಿ  ಜಿ ಸೇವೆಯನ್ನು ಆರಂಭಿಸಿದ್ದರೂಸಂಸ್ಥೆಯ ಸಿಬಂದಿಗಳೇ ಹೇಳುತ್ತಿದ್ದಂತೆ ಸ್ಥಳೀಯರಿಗೆ ಕೇವಲ ಜಿ ವೇಗದಲ್ಲಿ ಸೇವೆ ಲಭಿಸುತ್ತಿತ್ತುಆದರೂನೂತನ ಅಂತರ್ಜಾಲ ಸೇವೆಯ ವೇಗವು ತಕ್ಕಮಟ್ಟಿಗೆ ತೃಪ್ತಿಕರವಾಗಿತ್ತು.

ಈ ಸಂದರ್ಭದಲ್ಲಿ ಸಿಬಂದಿಯೋಬ್ಬರ ಸಲಹೆಯಂತೆ ಜಿ ನಿಸ್ತಂತು ಸಂಪರ್ಕವನ್ನು ಪಡೆದುಕೊಂಡಿದ್ದ ನನಗೆ, ಬಿ ಎಸ್ ಎನ್ ಎಲ್ ಸಂಸ್ಥೆಯ ಬಗ್ಗೆ ಹೆಮ್ಮೆಯೆನಿಸಿತ್ತು.ಆದರೆ  ಪ್ರಾರಂಭಿಕ ಹಂತದಲ್ಲಿ ಅಂತರ್ಜಾಲ ಸಂಪರ್ಕ ಮತ್ತು ಅವಶ್ಯಕ ಕಡತಗಳನ್ನು ಕ್ಷಣಾರ್ಧದಲ್ಲಿ ಕೆಳಗಿಳಿಸುವ ಸಾಮರ್ಥ್ಯವಿದ್ದ ಈ ಸಂಪರ್ಕವು, " ಬರುತ್ತಾ ಬರುತ್ತಾ ರಾಯರ ಕುದುರೆ ಕತ್ತೆಯಾಯಿತು " ಎನ್ನುವಂತೆ ಬದಲಾಗತೊಡಗಿತ್ತು. ತದನಂತರ ೨೦೧೪ ಮಧ್ಯಭಾಗದಲ್ಲಿ ಅಂತರ್ಜಾಲ ಸಂಪರ್ಕ ಲಭಿಸಲು ಅಡೆತಡೆಗಳು ಹಾಗೂ ಸಂಪರ್ಕ ದೊರೆತ ಬಳಿಕ ಮಧ್ಯದಲ್ಲೇ ಕಡಿತಗೊಳ್ಳುವುದು ಮತ್ತು ಸೇವೆಯ ವೇಗವು " ಆಮೆಗತಿ " ಯನ್ನು ತಲುಪಿದಂತಹ ಘಟನೆಗಳು ನಿರಂತರವಾಗಿ ಗ್ರಾಹಕರನ್ನು ಪೀಡಿಸಲು ಆರಂಭಿಸಿದ್ದವು. ಅರ್ಥಾತ್, ಬಿ ಎಸ್ ಎನ್ ಎಲ್ ನ ಈ ಸೇವೆಯ ಘೋಷಣೆಯಾದ " ಫಾಸ್ಟರ್ ದಾನ್ ಯುವರ್ ಥಾಟ್ಸ್ " ಎನ್ನುವ ವಾಕ್ಯವೇ ಸುಳ್ಳಾಗಿತ್ತು ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು.
೨೦೧೩ ರಲ್ಲಿ ಸಂಪರ್ಕವನ್ನು ಪಡೆದುಕೊಂಡಾಗ ಇರದ ಸಮಸ್ಯೆಯೊಂದು ಕೆಲವೇ ತಿಂಗಳುಗಳ ಬಳಿಕ  ಬಾಧಿಸಲು ಕಾರಣವೇನೆಂದು ಅರಿತುಕೊಳ್ಳಲು ಪ್ರಯತ್ನಿಸಿದರೂ, ಸೂಕ್ತ ಮಾಹಿತಿ ಮಾತ್ರ ದೊರೆತಿರಲಿಲ್ಲ. ಇದೇ ಕಾರಣದಿಂದಾಗಿ ಮಂಗಳೂರಿನ ಬಿ ಎಸ್ ಎನ್ ಎಲ್ ಕಚೇರಿಗೆ ಮಾಹಿತಿ ಹಕ್ಕು ಕಾಯಿದೆಯನ್ವಯ ಗತವರ್ಷದ ಡಿಸೆಂಬರ್ ಮೊದಲ ವಾರದಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಯಿತು. ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯು ನೀಡಿದ್ದ ವಿಸ್ತೃತ ಮಾಹಿತಿಗಳಿಂದಾಗಿ  ಸಮಸ್ಯೆಯ ಮೂಲ ಏನೆಂದು ತಿಳಿದುಬಂದಿತ್ತು.
ಟವರ್ ವ್ಯಾಪ್ತಿ
ಪ್ರಸ್ತುತ ಪುತ್ತೂರು ನಗರದಲ್ಲಿ ನಾಲ್ಕು ಟವರ್ ಗಳು ಜಿ ಸೇವೆಯನ್ನು ಒದಗಿಸುತ್ತಿದ್ದು, ಪ್ರತಿಯೊಂದು ಟವರ್ ನಲ್ಲಿ ೩ ಸೆಕ್ಟರ್ ಗಳಿವೆ. ಈ ಟವರ್ ಗಳ ವ್ಯಾಪ್ತಿಯು ೫೦ ಮೀ. ನಿಂದ ೨೦೦೦ ಮೀಟರ್ ಆಗಿದ್ದು, ಒಬ್ಬ ಗ್ರಾಹಕ ಮಾತ್ರ ಸಂಪರ್ಕದಲ್ಲಿದ್ದಾರೆ ೧೪ ಎಂ ಬಿ ಪಿ ಎಸ್ ವೇಗದಲ್ಲಿ ಅಂತರ್ಜಾಲ ದೊರೆಯುತ್ತದೆ. ಅಂತೆಯೇ ಇದಕ್ಕೂ ಅಧಿಕ ಸಂಖ್ಯೆಯ ಗ್ರಾಹಕರು ಸಂಪರ್ಕದಲ್ಲಿದ್ದರೆ, ಈ ವೇಗವು ಇವರೆಲ್ಲರಿಗೂ ಸಮವಾಗಿ ಹಂಚಿಹೊಗುತ್ತದೆ. ಈ ಮಾಹಿತಿಗಳನ್ನು ನೀಡುವ ಸಂದರ್ಭದಲ್ಲಿ ಪುತ್ತೂರು ನಗರದಲ್ಲಿ ೧೭,೦೧೪ ಗ್ರಾಹಕರು ಈ ಸೇವೆಯನ್ನು ಪಡೆದುಕೊಂಡಿದ್ದು, ಇದರಲ್ಲಿ ಅರ್ಧದಷ್ಟು ಗ್ರಾಹಕರು ಏಕ ಕಾಲದಲ್ಲಿ ಅಂತರ್ಜಾಲವನ್ನು ಬಳಸಿದರೂ, ಸ್ವಾಭಾವಿಕವಾಗಿಯೇ ಇವರಿಗೆ ಲಭಿಸುವ ವೇಗದ ಪ್ರಮಾಣವು ಕಡಿಮೆಯಾಗುತ್ತಿತ್ತು.
ವೇಗವೆಷ್ಟು?
ಪುತ್ತೂರಿನಲ್ಲಿ ಟವರ್ ಗಳ ಸಾಮರ್ಥ್ಯಕ್ಕಿಂತ ಅಧಿಕ ಸಂಪರ್ಕಗಳನ್ನು ನೀಡಿರುವುದು ಜಿ ಸೇವೆಯ ವೇಗ ಕಡಿಮೆಯಾಗಲು ಕಾರಣವೇ?, ಎಂದು ನಾವು ಕೇಳಿದ್ದ ಪ್ರಶ್ನೆಗೆ ಮೇಲಿನ ಉತ್ತರವನ್ನು ನೀಡಲಾಗಿತ್ತು. ಆದರೆ ಅಂತರ್ಜಾಲ ಸಂಪರ್ಕ ಸಿಗದಿರುವುದು, ಸಿಕ್ಕರೂ ಅಂತರ್ಜಾಲ ತಾಣಗಳನ್ನು ತೆರೆಯಲು ಸಾಧ್ಯವಾಗದಿರುವುದು ಮತ್ತು ಸಂಪರ್ಕ ದೊರೆತ ಬಳಿಕ ಆಕಸ್ಮಿಕವಾಗಿ ಸಂಪರ್ಕ ಕಡಿತವಾಗುವ ಸಮಸ್ಯೆಗೆ ಇದು ಕಾರಣವಲ್ಲ ಎನ್ನುವ ಸಮಜಾಯಿಷಿಯನ್ನುನಮಗೆ ನೀಡಲಾಗಿತ್ತು. ವಿಶೇಷವೆಂದರೆ ಸಾ.ಮಾ. ಅಧಿಕಾರಿ ನೀಡಿರುವ ಮಾಹಿತಿಯಂತೆ ಸೇವೆಯ ವೇಗವು ೧೪ ಎಂ ಬಿ ಪಿ ಎಸ್ ಆಗಿದ್ದು, ನಿಗದಿತ ಸಮಯದಲ್ಲಿ ಸಂಪರ್ಕದಲ್ಲಿರುವ ಗ್ರಾಹಕರಿಗೆ ಈ ವೇಗವು ಸಮವಾಗಿ ಹಂಚಿಹೋಗುವುದಾದಲ್ಲಿ, ಇಂತಹ ಸಮಸ್ಯೆ ಉದ್ಭವಿಸುವ ಸಾಧ್ಯತೆಗಳಿವೆ ಎನ್ನುವುದು ನಮ್ಮ ಅನಿಸಿಕೆ. ಅಪೇಕ್ಷಿತ ಮಾಹಿತಿಗಳನ್ನು ಒದಗಿಸಿದ ಅಧಿಕಾರಿಯು ಒಂದು ಟವರ್ ನ ಸಾಮರ್ಥ್ಯದ ಬಗ್ಗೆ ವಿವರಣೆಯನ್ನು ನೀಡುವಾಗಒಂದು ಟವರ್ ನಿಂದ ನೀಡಬಹುದಾದ ಗರಿಷ್ಠ ಸಂಪರ್ಕಗಳ ಸಂಖ್ಯೆಯನ್ನು ನಮಗೆ ನೀಡಿಲ್ಲ. ಆದರೆ ಸೇವೆಯನ್ನು ಬಳಸಿಕೊಳ್ಳುವ ಗ್ರಾಹಕರ ಸಂಖ್ಯೆಗೆ ಅನುಗುಣವಾಗಿ ಸಂಪರ್ಕದ ವೇಗವು ಕ್ಷಣಕ್ಷಣಕ್ಕೂ ಬದಲಾಗುತ್ತದೆ ಎಂದು ತಿಳಿಸಿರುತ್ತಾರೆ. ಇದರರ್ಥ ಸೇವೆಯನ್ನು ಬಳಸುತ್ತಿರುವ ಗ್ರಾಹಕರ ಸಂಖ್ಯೆ ಹೆಚ್ಚಿದಂತೆಯೇ, ನಿಮಗೆ ಲಭಿಸುವ ಅಂತರ್ಜಾಲದ ವೇಗವು ನಿಶ್ಚಿತವಾಗಿಯೂ ಕಡಿಮೆಯಾಗುತ್ತದೆ. ಹಗಲಿನಲ್ಲಿ ಅತ್ಯಧಿಕ ಸಂಖ್ಯೆಯ ಗ್ರಾಹಕರು ಅಂತರ್ಜಾಲವನ್ನು ಬಳಸುವುದರಿಂದ, ಸೇವೆಯ ವೇಗವು ಹಗಲಿನಲ್ಲಿ ಕನಿಷ್ಠ ಮಟ್ಟದಲ್ಲಿ ಇರುತ್ತದೆ ಎನ್ನುವ ನಮ್ಮ ವಾದವನ್ನು ಮೇಲಿನ ಮಾಹಿತಿಗಳು ಸಮರ್ಥಿಸಿದರೂ, ಇಲಾಖೆಯ ಮಾಹಿತಿಯಂತೆ ಇದು ಅಸಾಧ್ಯವೆನ್ನುವುದು ಮಾತ್ರ ನಂಬಲಸಾಧ್ಯವೆನಿಸುತ್ತದೆ.
ಅದೇನೇ ಇರಲಿ, ಪುತ್ತೂರಿನ ದೂರವಾಣಿ ಕಚೇರಿಯ ಆವರಣದಲ್ಲಿರುವ ಟವರ್ ಮತ್ತು ಸೀಟು ಗುಡ್ಡೆಯ ಮೇಲಿನ ಟವರ್ ಗಳ ನಡುವೆ ಹಾಗೂ ಇವೆರಡೂ ಟವರ್ ಗಳಿಂದ ಕೇವಲ ೧ ಮತ್ತು ೩/ ೪ ಕಿ.ಮೀ ಅಂತರದಲ್ಲಿ ನಾನು ಅಂತರ್ಜಾಲ ಸೇವೆಯನ್ನು ಬಳಸುತ್ತಿದ್ದು, ಇಂದಿಗೂ ಜಿ ಸೇವೆಯು ಪ್ರಾರಂಭಿಕ ಹಂತದಲ್ಲಿ ಲಭಿಸಿದಷ್ಟು ವೇಗದಲ್ಲಿ ಲಭಿಸುತ್ತಿಲ್ಲ.ಕೆಲವೊಮ್ಮೆ ಸಂಪರ್ಕ ಲಭಿಸದಿರುವುದು ಹಾಗೂ ಸಂಪರ್ಕ ಲಭಿಸಿದರೂ ಪದೇಪದೇ ಕಡಿತಗೊಳ್ಳುವುದು ಮತ್ತು ವೇಗವು ಬೆರಳೆಣಿಕೆಯಷ್ಟು ಕೆ ಬಿ ಗಳಿಗೆ ಅಥವಾ ಶೂನ್ಯಕ್ಕೆ ಕುಸಿಯುವುದೇ ಮುಂತಾದ ಸಮಸ್ಯೆಗಳು ಇಂದಿಗೂ ಬಾಧಿಸುತ್ತಲೇ ಇವೆ.  ಕೆಲವೇ ದಿನಗಳ ಹಿಂದೆ ೧೨ ಎಂ ಬಿ ಗಾತ್ರದ ಕಡತವೊಂದನ್ನು ಕೆಳಗಿಳಿಸಲು ಬರೋಬ್ಬರಿ ೨೯ ನಿಮಿಷಗಳು ತಗಲಿದ್ದುದು, ಬಿ ಎಸ್ ಎನ್ ಎಲ್ ಸೇವೆಯ ಬಗ್ಗೆ ನನ್ನ ಟೀಕೆ ಮತ್ತು ಅಭಿಪ್ರಾಯವನ್ನು ಸಮರ್ಥಿಸುತ್ತದೆ.
 ಪ್ರಸ್ತುತ ಪುತ್ತೂರಿನಲ್ಲಿ 3 ಜಿ  ಅಂತರ್ಜಾಲ ಸೇವೆಯನ್ನು ಒದಗಿಸುತ್ತಿರುವ  ಖಾಸಗಿ ಸೇವಾ ಸಂಸ್ಥೆಗಳ ಸೇವೆಯೊಂದಿಗೆ ತುಲನೆ ಮಾಡಿದಾಗ,ಬಿ ಎಸ್ ಎನ್ ಎಲ್ ಸಂಸ್ಥೆಯು ನೀಡುತ್ತಿರುವ ಸೇವೆಯು ನಿಶ್ಚಿತವಾಗಿಯೂ ತೃಪ್ತಿಕರವಾಗಿಲ್ಲ.ಇದೀಗ ಖಾಸಗಿ ಸಂಸ್ಥೆಗಳು ಅನೇಕ ನಗರಗಳಲ್ಲಿ ಜಿ ಸೇವೆಯನ್ನು ನೀಡಲು ಆರಂಭಿಸಿದ್ದು, ಪ್ರಾಯಶಃ ಮುಂದಿನ ದಿನಗಳಲ್ಲಿ ಪುತ್ತೂರಿನಲ್ಲೂ ಲಭ್ಯವಾಗುವ ಸಾಧ್ಯತೆಗಳಿವೆ. ಆದುದರಿಂದ ತನ್ನ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸಲು ಬಿ ಎಸ್ ಎನ್ ಎಲ್ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನವನ್ನು ನಡೆಸಬೇಕಾಗಿದೆ. ತನ್ಮೂಲಕ ಗ್ರಾಹಕರ ವಿಶ್ವಾಸವನ್ನು ಮರಳಿ ಗಳಿಸಬೇಕಿದೆ. ಇದಕ್ಕೆ ತಪ್ಪಿದಲ್ಲಿ ಅಧಿಕತಮ ಗ್ರಾಹಕರು ಖಾಸಗಿ ಸೇವಾ ಸಂಸ್ಥೆಗಳ ಅಂತರ್ಜಾಲ ಸಂಪರ್ಕವನ್ನು ಪಡೆದುಕೊಳ್ಳುವುದರಲ್ಲಿ ಸಂದೇಹವಿಲ್ಲ.
ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 

No comments:

Post a Comment